‘‘ನಾಟ್ ಇನ್ ಮೈ ನೇಮ್’’
ಭಾರತದ ಹೆಮ್ಮೆಯ ಪ್ರಜೆಯಾಗಿ, ಸಕ್ರಿಯ ಅಥವಾ ನಿಷ್ರ್ಕೀಯವಾಗಿ ಹತ್ಯೆಯನ್ನು ಬೆಂಬಲಿಸುವ ಯಾರ ಅಭಿಪ್ರಾಯವನ್ನೂ ನಾನು ಅನುಮೋದಿಸುವುದಿಲ್ಲ. ನನ್ನ ನಿಷ್ಠೆ ಇರುವುದು ಭಾರತದ ಸಂವಿಧಾನಕ್ಕೆ. ಸರಕಾರ ಅಥವಾ ಇತರ ಯಾವುದೇ ಸಂಘ ಸಂಸ್ಥೆ ನಮ್ಮ ದೇಶದ ಪ್ರಜಾಪ್ರಭುತ್ವದ ಮೂಲತತ್ವವನ್ನು ಕಡೆಗಣಿಸಿದರೆ, ಅದನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಕ್ರೂರ ವ್ಯಕ್ತಿಗಳ ಗುಂಪು ಜುನೈದ್ ಅವರನ್ನು ಹತ್ಯೆ ಮಾಡಿದೆ. ಹಂತಕರು ಯಾವ ಧರ್ಮಕ್ಕೆ ಸೇರಿದ್ದರೂ ನಾನು ಲೆಕ್ಕಿಸುವುದಿಲ್ಲ. ಜುನೈದ್ ಯಾವ ಧರ್ಮಕ್ಕೆ ಸೇರಿದವ ಎನ್ನುವುದೂ ನನಗೆ ಮುಖ್ಯವಲ್ಲ. ಒಂದು ಅಂಶದ ಬಗ್ಗೆ ಮಾತ್ರ ನನ್ನ ಕಳಕಳಿ. ತೀರಾ ಸಂಕುಚಿತ, ಕ್ರೂರ ಮನುಷ್ಯರ ಒಂದು ಗುಂಪು ಹದಿಹರೆಯದ ವ್ಯಕ್ತಿಯನ್ನು ಹತ್ಯೆ ಮಾಡಿ, ಇತರ ಮೂವರು ಯುವಕರ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದೆ! ಜುನೈದ್ಗೆ 16 ವರ್ಷ. ಜುನೈದ್ ತಾಯಿಗಾಗಿ ನನ್ನ ಹೃದಯ ಒಡೆಯುತ್ತದೆ. ಆ ಕ್ರೂರ ಮನುಷ್ಯರ ಗುಂಪು ಜುನೈದ್ನನ್ನು ಹತ್ಯೆ ಮಾಡಿರುವುದು ಮಾತ್ರವಲ್ಲ, ಮತ್ತೊಂದು ಕ್ರೂರಿಗಳ ಗುಂಪು ಅವರನ್ನು ಪ್ರಚೋದಿಸಿದೆ. ಆ ಮತಿಗೇಡಿ ಕೃತ್ಯಕ್ಕೆ ಸಾಕ್ಷಿಯಾಗಿಯೂ ಮೌನವಾಗಿ ಉಳಿದ ಕ್ರೂರಿಗಳ ಗುಂಪು ಕೂಡಾ ಜುನೈದ್ ಹತ್ಯೆಯಲ್ಲಿ ಶಾಮೀಲಾಗಿದೆ. ಮತ್ತೆ ಕೆಲ ಕ್ರೂರ ವ್ಯಕ್ತಿಗಳು ಈ ಹತ್ಯೆಯನ್ನು ಸಮರ್ಥಿಸುತ್ತಿದ್ದಾರೆ. ಹೌದು! ದ್ವೇಷ ಎಲ್ಲ ಬಗೆಯ ಸಮರ್ಥನೆಗೂ ಅವಕಾಶ ಕೊಡುತ್ತದೆ. ಹತ್ಯೆಯ ಸುದೀರ್ಘ ಪಟ್ಟಿಯೇ ಇದೆ. ಅದು...