ನಮ್ಮವರೇ ನಮ್ಮನ್ನು ಲೂಟಿ ಮಾಡಿದ್ರು : ಹಾರ್ದಿಕ್ ಪಾಂಡ್ಯ


ಲಂಡನ್: ಓವಲ್ ಮೈದಾನದಲ್ಲಿ ನಡೆದ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಹೀನಾಯ ಸೋಲು ಕಂಡಿದೆ.
ಈ ಸೋಲಿಗೆ ಕಾರಣಗಳ ಕುರಿತು ಭಾರೀ ಚರ್ಚೆಯೇ ನಡೆದಿದೆ. ಕಾರಣ ಏನೆಂಬುದನ್ನು ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಬಹಿರಂಗಪಡಿಸಿದ್ದಾರೆ.

ಈ ಪಂದ್ಯದಲ್ಲಿ ಪಾಂಡ್ಯ 43 ಎಸೆತಗಳಲ್ಲಿ 76 ರನ್ ಗಳಿಸಿದ್ದರು. ರವೀಂದ್ರ ಜಡೇಜ ಜೊತೆಗೂಡಿ ಆಟವಾಡುವಾಗ ಪಾಂಡ್ಯ ರನ್ ಔಟ್ ಆಗಿದ್ದರು. ಅವರು ಔಟಾಗಿ ಬಂದ ಬಳಿಕ ಟ್ವಿಟರ್ ನಲ್ಲಿ ಸೋಲಿಗೆ ಕಾರಣ ನಮ್ಮವರೇ ಎಂದು ಹೇಳಿದ್ದಾರೆ.
ನಮ್ಮವರೇ ನಮ್ಮನ್ನು ಲೂಟಿ ಮಾಡಿದ್ರು ಎಂದು ಪಾಂಡ್ಯ ಟ್ವೀಟ್ ಮಾಡಿದ್ದು, ಇದು ವಿವಾದ ಪಡೆದುಕೊಂಡಿದೆ. ಕೂಡಲೇ ಪಾಂಡ್ಯ ಟ್ವೀಟ್ ಡಿಲೀಟ್ ಮಾಡಿದ್ದಾರೆ.
‘ಪಾಕ್ ಎದುರು ಸೋಲಿನ ಕುರಿತಾಗಿ ಪಾಂಡ್ಯ ಹೇಳಿದ ಮಾತು ಇದಾಗಿದೆ. ನಮ್ಮವರೇ ಸೋಲಿಗೆ ಕಾರಣ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಪಾಂಡ್ಯ ಟ್ವೀಟ್ ರೀ ಟ್ವೀಟ್ ಆಗಿ ವೈರಲ್ ಆಗಿದೆ.

Comments

Popular posts from this blog

ಉಪ್ಪಿನಂಗಡಿ ಮತ್ತು ಕುಂತೂರು ಲುಕ್ಮಾನ್ ಅಭಿಮಾನಿ ಬಳಗದವರಿಂದ ಇಫ್ತಾರ್ ಕೂಟ

ರಂಝಾನ್ ಪ್ರಯುಕ್ತ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ವಿತರಿಸಿದ ಶಿಪಲ್ ರಾಜ್

ಉಪ ಚುನಾವಣೆ: ಪಂಜಾಬ್, ಕೇರಳದಲ್ಲಿ ಬಿಜೆಪಿಗೆ ಮುಖಭಂಗ

ಭಾರತ ಕೊಲೆಗಡುಕ ರಾಷ್ಟ್ರವಾಗಿ ಪ್ರಸಿದ್ಧಿ, ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಟಿಪ್ಪು: ಜ್ಞಾನ ಪ್ರಕಾಶ್ ವಿವಾದಾತ್ಮಕ ಹೇಳಿಕೆ

ಮಂಗಳೂರಿನಲ್ಲಿ ಐದು ಇಂದಿರಾ ಕ್ಯಾಂಟೀನ್: ಯು ಟಿ ಖಾದರ್