ಪಟಾಕಿ ಜತೆ ಆಜಾನ್ ಹೋಲಿಸಿದ ತ್ರಿಪುರಾ ರಾಜ್ಯಪಾಲ: ವಿವಾದ
ಅಗರ್ತಲ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ತ್ರಿಪುರಾದ ರಾಜ್ಯಪಾಲ ತಥಾಗತ ರಾಯ್ ಅವರು ಧ್ವನಿವರ್ಧಕಗಳಲ್ಲಿ ‘ಆಜಾನ್’ ಹೇಳುವುದರ ಜತೆ ಹೋಲಿಕೆ ಮಾಡಿದ್ದು ವಿವಾದಕ್ಕೆ ಗುರಿಯಾಗಿದೆ.
ಪಟಾಕಿ ಸಿಡಿಸುವ ವಿಚಾರವಾಗಿ ಸರಣಿ ಟ್ವೀಟ್ಗಳನ್ನು ಮಾಡಿರುವ ಅವರು, ‘ಪ್ರತಿ ದೀಪಾವಳಿ ಸಂದರ್ಭದಲ್ಲಿಯೂ ಪಟಾಕಿಗಳಿಂದ ಶಬ್ದ ಮಾಲಿನ್ಯವಾಗುತ್ತದೆ ಎಂಬ ವಿವಾದ ಶುರುವಾಗುತ್ತದೆ. ಆದರೆ, ಮುಂಜಾನೆ 4.30ಕ್ಕೆ ಕೇಳಿಬರುವ ಆಜಾನ್ ಬಗ್ಗೆ ವಿವಾದವಾಗುವುದಿಲ್ಲ’ ಎಂದಿದ್ದಾರೆ.
ಆಜಾನ್ನಿಂದ ಶಬ್ದ ಮಾಲಿನ್ಯವಾಗುವ ಬಗ್ಗೆ ಜಾತ್ಯತೀತವಾದಿಗಳು ಸುಮ್ಮನಿರುವ ಬಗ್ಗೆ ಉಲ್ಲೇಖಿಸಿದ ಅವರು, ಧ್ವನಿವರ್ಧಕ ಬಳಸಬೇಕೆಂದು ಕುರ್ ಆನ್ನಲ್ಲಿ ಹೇಳಿಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಿರ್ಬಂಧ ಪಟಾಕಿ ಸಿಡಿಸುವುದರ ಮೇಲೆ ನಿರ್ಬಂಧ ವಿಧಿಸಲಾಗಿರುವ ಹಿನ್ನೆಲೆಯಲ್ಲಿ ಅವರು ಈ ಟ್ವೀಟ್ ಮಾಡಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ರಾಜ್ಯಪಾಲರ ಟ್ವಿಟರ್ ಸಂದೇಶಕ್ಕೆ ಅನೇಕ ಮಂದಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

Comments
Post a Comment